The current query has no posts. Please make sure you have published items matching your query.
Banner1
previous arrow
next arrow

News View

News

ಅಕ್ರಮವಾಗಿ ಸಂಗ್ರಹಿಸಿಕ್ಫ್ಕಿದ್ದ ೭೪೩ ಕೆ.ಜಿ ಅಕ್ಕಿ ವಶ ಕೊಳ್ಳೇಗಾಲ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಜಂಟಿ ದಾಳಿ ನಡೆಸಿದಾಗ ಪರಾರಿಯಾಗಿದ್ದು, 14 ಮೂಟೆಯಲ್ಲಿ ಸಂಗ್ರಹಿಸಿಟ್ಟಿದ್ದ 743 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.ಪಾಳ್ಯ ಗ್ರಾಮದ ಸುಬ್ಬನಾಯಕ ಎಂಬಾತ ಪರಾರಿಯಾದ ಆರೋಪಿ. ಈತ ಪಾಳ್ಯ ಗ್ರಾಮದ ಜನರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಖಚಿತ ಮೇರೆಗೆ ಆಹಾರ ನಿರೀಕ್ಷಕ ಪ್ರಸಾದ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಸುಪ್ರೀತ್ ಸಿಬ್ಬಂದಿಗಳು ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದು, ದಾಸ್ತಾನು ಮಾಡಿದ್ದ ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪರಾರಿಯಾದ ಆರೋಪಿ ಪತ್ತೆಗೆ ಕ್ರಮ ಜರುಗಿಸಿದ್ದಾರೆ.ದಾಳಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಮಧು ಕುಮಾರ್, ಡಿವೈಎಸ್ಪಿ ಅಪರಾಧ ಪತ್ತೆದಳದ ಎಎಸ್ಐ ತಖೀಉಲ್ಲಾ, ಹೆಡ್ ಕಾನ್ಸಟೇಬಲ್ ವೆಂಕಟೇಶ್, ರವಿಕುಮಾರ್, ಬಿಳಿಗೌಡ ಇದ್ದರು.

27-06-2025

ಯುವ ಪುರಸ್ಕಾರ ಪ್ರಶಸ್ತಿ ಬಂದದ್ದು ನನಗೆ ಆಶ್ಚರ್ಯ- ದಿಲೀಪ್ ಕುಮಾರ್ ರ್ವಿಮರ್ಶಾತ್ಮಕವಾಗಿ ಬರೆಯಬೇಕಾದರೆ ಗಾಬರಿ ಕುತೂಹಲ ಇರಬೇಕು . ರೇಷ್ಮೆನಾಡು ದಿನ ಪತ್ರಿಕೆಯಲ್ಲಿ ನನ್ನ ಮೊದಲ ಲೇಖನ ನಾನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ನನ್ನ ಮೊದಲ ಲೇಖನ ವಚನ ಆಧರಿಸಿದ ಕದಂಬ ಮಾರಿ ತಂದೆ ಈ ಲೇಖನ 2016ರಲ್ಲಿ ನಮ್ಮ ರೇಷ್ಮೆನಾಡು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಇದಕ್ಕೆ ಸಂಪಾದಕರಾಗಿದ್ದ ದಿವಂಗತ ಸದಾಶಿವ ಗಟ್ಟವಾಡಿಪುರ ಅವರೇ ಕಾರಣ ಈಗ ನನ್ನ ಶಬ್ದ ಸೋಪಾನ ವಿಮರ್ಶಾತ್ಮಕ ಕೃತಿಯ ಲೇಖಕರ ಮಾತಿನಲ್ಲಿ ಪ್ರಕಟಿಸಿದ್ದೇನೆ ಎಂದರು. ನನ್ನ ಪಚ್ಚೆಯ ಜಗಲಿ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ನನಗೆ ಸಂತೋಷದ ಜೊತೆಗೆ ಆಶ್ಚರ್ಯವಾಯಿತು ಎಂದು ಯುವ ಪುರಸ್ಕಾರ ಪ್ರಶಸ್ತಿ ವಿಜೇತ ಆರ್ ದಿಲೀಪ್ ಕುಮಾರ್ ಹೇಳಿದರುಜಿಲ್ಲಾ ಕಾರ್ಯ ನಿರತ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಒಂದು ವಿಮರ್ಶಾತ್ಮಕ ಕೃತಿಗೆ ಮೊಟ್ಟಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಬಂದಿರುವುದು ಸಂತೋಷ ದ ವಿಷಯ ಜೊತೆಗೆ ಇಂತಹ ಕೃತಿಗಳಿಗೂ ಪ್ರಶಸ್ತಿ ಬರಬಹುದು ಎಂದು ನಾನು ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

26-06-2025